Monday, November 7, 2011

ಮರೆಯುವ ಮುನ್ನ...

ಮರೆಯುವ ಮುನ್ನ ಮೇಲೇರಿಕೆಗೆ ಮೆಟ್ಟಲಾಗಿದ್ದವರ ಒಮ್ಮೆ ನೆನಪಿಸಿಕೊಳ್ಳಿ !
ಮರೆಯಾದವರನ್ನೊಮ್ಮೆ ಕಣ್ತುಂಬಿಕೊಳ್ಳಿ
ಮೆರೆದವರನ್ನೂ ಮುಂದಿಟ್ಟುಕೊಳ್ಳಿ !
ಮರೆತವರನ್ನೂ ಮನಸ್ಸಿನಲ್ಲಿಟ್ಟುಕೊಳ್ಳಿ !
ಆಮೇಲೆ ಎಲ್ಲವನ್ನೂ ಮರೆತು ಬಿಡಿ !
ಮನಸ್ಸು ನಿರಾಳವಾಗುತ್ತದೆ !
                   ಡಾ. ಸಿದ್ರಾಮ ಕಾರಣಿಕ

3 comments:

  1. ಮರೆತವರನ್ನೂ ನೆನಪಿಸಿಕೊಳ್ಳುವುದಿದೆಯಲ್ಲ ಅದು ಒಂದಿಷ್ಟು ಹಿಂಸೆ ಅನ್ನಿಸುತ್ತೆ ಕಣ್ರಿ ! ಮರೆತವರನ್ನು ಮರೆತು ; ಮರೆಯದವರನ್ನು ನೆನಪಿಸಿಕೊಂಡರೆ .... ?

    ReplyDelete
  2. ಮರೆಯುವುದು ವಯಸ್ಸು ಮಾಗಿದ ನಂತರ ! ಮೆರೆಯುವುದು ವಯಸ್ಸು ಹದಿ ಇರುವಾಗ ! ಮರೆತು ಮರುಗುವುದು ಕೂಡ ಮುದಿ ವಯಸ್ಸಿನಲ್ಲಿಯೇ ! ಯಾರನ್ನೂ ಮರೆಯುವ ಪ್ರಮೇಯ ಇಲ್ಲ ; ಭೂಮಿಗೆ ಪ್ರಳಯದ ಭೀತಿಯೂ ಇಲ್ಲ ! ಇದು ಮರಾಠಿಯ ದಲಿತ ಕವಿಯೊಬ್ಬರ ಕಾವ್ಯದ ಪ್ರಭಾವದಿಂದ ಹುಟ್ಟಿದ ಮಾತ್ಗವಿತೆ !

    ReplyDelete
  3. ಇಲ್ಲಿದೆ ನೋಡಿ ನನ್ನ ಮಾತ್ಗವಿತೆ :
    ಮಳೆಯೆಂದರೆ ಬರೀ ಮಳೆಯಲ್ಲ !
    ಬೆಳೆ ಹಾಳು ಮಾಡಬೇಕು !
    ಕೋಟೆ ಕೊತ್ತಲುಗಳನ್ನು ಕೆಡುವಬೇಕು !
    ಪಾಪ-ಪುಣ್ಯ, ಸ್ವರ್ಗ-ನರಕ, ದೇವರು-ದೆವ್ವ
    ಪೂಜೆ-ಪೂಜಾರಿ, ಎಲ್ಲವನ್ನೂ ಕೊಚ್ಚಿಕೊಂಡು ಹೋಗಬೇಕು !
    ಹೆಂಗಸು, ಗಂಡಸು, ಮಕ್ಕಳು, ಮುದುಕರನ್ನದೇ
    ನೆಲ, ನಾಲೆ, ಗುಡ್ಡ, ಮಡ್ಡಿ, ಕಸ-ಕಡ್ಡಿ ಎನ್ನದೇ
    ಎಲ್ಲವನ್ನೂ ಎಲ್ಲರನ್ನೂ ಸ್ವಾಹಾ ಮಾಡಬೇಕು !
    ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳಬೇಕು ಮಳೆ !
    ಸುರಿಯಬೇಕು ಧೋ ಧೋ ಎಂದು !
    ಎಲ್ಲವೂ ಕೊಚ್ಚಿಕೊಂಡು
    ಭೂಮಿಯ ಮೇಲೆ ಏನೂ ಇಲ್ಲವಾದಾಗ
    ಹೊಸ ಜೀವಿಗಳ ಉಗಮವಾಗಬೇಕು !
    ಅಲ್ಲಿ ಮೇಲು ಕೀಳಿನ ತಿಳಿಗೇಡಿತನಕ್ಕೆ ಅವಕಾಶ ಇರದು !
    ಹಾಳುಮೂಳಗಳಿಗೆ ಮೂಲವಿರದು !
    ಬದುಕು ಮಾತ್ರ ನಿರ್ಭೀತವಾಗಿರುತ್ತದೆ !
    ಮನುಷ್ಯ ಮನುಷ್ಯನನ್ನು
    ಮನುಷ್ಯನೆಂದೇ ಪರಿಗಣಿಸುತ್ತಾನೆ !
    ಬಾಂಧವ್ಯಗಳ ಹೊಸ ಮನ್ವಂತರ ಆರಂಭವಾಗುತ್ತದೆ !
    - ಡಾ. ಸಿದ್ರಾಮ ಕಾರಣಿಕ

    ReplyDelete