Saturday, April 28, 2012

ಅನೈತಿಕ ಸಂಬಂಧ ಒಂಟಿ ಮಹಿಳೆಯ ಪ್ರಾಣ ನೀಗಿತ್ತು !

illicit-relationship-bangalore-lone-woman-murder-solvedಬೆಂಗಳೂರು,ಮಾ. 25: ಅವನೋ 15 ವರ್ಷದಿಂದ ಆ ಹೆಂಗಸಿನ ಜತೆ ಸಂಬಂಧವಿಟ್ಟುಕೊಂಡಿದ್ದ. ಆದರೂ ಐದು ವರ್ಷದ ಹಿಂದೆ ಬೇರೊಬ್ಬ ಯುವತಿಯನ್ನು ಮದ್ವೆಯಾದ. ಆದರೆ ಆಕೆಗೆ ಗಂಡನ ಪೂರ್ವಾಶ್ರಮದ ವಾಸನೆ ಬಡಿಯಿತು. ಏನೋನೋ ಕಸರತ್ತು ಮಾಡಿ, ಬೇಡ ಕಣ್ರಿ ಅವಳ ಸಹವಾಸ. ನಮ್ಮ ಸಂಸಾರ ನಮಗೆ ಎಂದು ತಿಳಿಹೇಳಿದಳು. ಆ ಹೆಂಗಸಿಗೂ ಹಲವು ಬಾರಿ ಎಚ್ಚರಿಕೆ ನೀಡಿದ್ದಾಳೆ. ಆದರೆ ಅವ, ಅವಳಿಂದ ಬಿಡುಗಡೆ ಬಯಸಲಿಲ್ಲ.

ಸರಿ ಈಕೆಗೂ ರೋಸಿ ಹೋಗಿತ್ತು. ತಮ್ಮನನ್ನು ಕರೆದು ಇಂತೆಂದಳು - ನೋಡು ನಿಮ್ಮ ಭಾವ ಇದಾನಲ್ಲ. ಅವಯ್ಯ ಎಷ್ಟು ಹೇಳಿದರೂ ಕೇಳುತ್ತಿಲ್ಲ. ಅದ್ಯಾರೋ ಹೆಂಗಸಿನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾನೆ. ಇನ್ನು ನನ್ನ ಕೈಯಲ್ಲಿ ಸಹಿಸೋಕೆ ಆಗೊಲ್ಲ. ಹೇಗಾ
ದರೂ ಮಾಡಿ, ಅವಳನ್ನು ಇಲ್ಲವಾಗಿಸು ಎಂದು ಸುಪಾರಿ ಕೊಟ್ಟೇ ಬಿಟ್ಟಳು. ಮುಂದ... ಪ್ರಕರಣ ಭೇದಿಸಿದ ರಾಮಮೂರ್ತಿ ನಗರ ಪೊಲೀಸರು ಏನು ಹೇಳುತ್ತಾರೋ ಕೇಳಿ...

ವೃತ್ತಿಯಿಂದ ಬ್ಯೂಟಿಷಿಯನ್ ಆಗಿದ್ದ ನಿರ್ಮಲಾ ಎಂಬ ಮಹಿಳೆಯನ್ನು ಕಳೆದ ತಿಂಗಳು (ಫೆ.27) ಮಟಮಟ ಮಧ್ಯಾಹ್ನ ಯರಯ್ಯನಪಾಳ್ಯದ ಆಕೆಯ ಮನೆಯಲ್ಲಿ ಕೊಲೆ ಮಾಡಿ, ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದಾಗ...

ಆ ಒಂಟಿ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಹತ್ಯೆಯ ರೂವಾರಿ ಮಹಿಳೆ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಮಾರತ್‌ಹಳ್ಳಿಯ ಸವಿತಾ (28), ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಈಕೆಯ ದೊಡ್ಡಪ್ಪನ ಮಗ ಅನಿಲ್ (29), ಕೃಷ್ಣನಗರದ ಬಸವ (22), ರವಿ (25), ಪ್ರಸನ್ನ (20), ಕೋರಮಂಗಲದ ಮನೋಜ್ (23), ಕೊಳಂದ ವಸು (20), ಮುರುಗ (19), ಸುಬ್ರಮಣಿ (20), ಬಸವಪುರದ ಮುರಳಿ (29), ವಿವೇಕ್‌ನಗರದ ಕಿಶನ್‌ಕುಮಾರ್ (20), ಕೈಕೊಂದ್ರಹಳ್ಳಿಯ ಸುನಿಲ್ (23), ಕಸವನಹಳ್ಳಿಯ ಶಂಕರ್ (24) ಎಂಬವರೇ ಬಂಧಿತ ಆರೋಪಿಗಳಾಗಿದ್ದು, ಸೀನ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಸವಿತಾರ ಗಂಡ, ಬಾಷ್‌ ಕಂಪನಿಯ ನೌಕರ ರಮೇಶ್ ಎಂಬಾತ ಕೆ.ಆರ್. ಪುರಂ ಯರಯ್ಯನಪಾಳ್ಯದ ಕುಂಬಾರ ಬೀದಿಯಲ್ಲಿ ವನೀಸ್‌ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ನಿರ್ಮಲಾ (42) ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ ಸವಿತಾ, ನಿರ್ಮಲಾರನ್ನು ಕೊಲೆಮಾಡಲು ತನ್ನ ಸೋದರ ಸಂಬಂಧಿ ಅನಿಲನಿಗೆ ನಾಲ್ಕು ಲಕ್ಷ ರೂ. ಸುಪಾರಿ ನೀಡಿದ್ದರು ಎನ್ನಲಾಗಿದೆ. ಅನಿಲ ಕೊಲೆ ಆರೋಪಿಗಳಿಗೆ ಎರಡೂವರೆ ಲಕ್ಷ ರೂ. ಸುಪಾರಿ ನೀಡಿದ್ದ.

ಹತ್ಯೆ ಮಾಡಿದ್ದು ಹೀಗೆ: ಆರೋಪಿ ಅನಿಲ್‌ ಕುಮಾರ್‌ ಸುಪಾರಿ ಹಂತಕರೊಂದಿಗೆ ಫೆ. 27 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀನಿವಾಸರೆಡ್ಡಿ ಲೇಔಟ್‌ನಲ್ಲಿರುವ ಮನೆಗೆ ನುಗ್ಗಿ ನಿರ್ಮಲಾಳ ತಲೆಗೆ ರಾಡ್‌ ಮತ್ತು ದೊಣ್ಣೆಯಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದ. ನಿರ್ಮಲಾಳ ಕೊಲೆಯಾಗಿ ಒಂದು ವಾರದ ತನಕ ರಮೇಶ್‌ನಿಗೆ ಯಾವುದೇ ಮಾಹಿತಿ ಇರಲಿಲ್ಲ. ನಿರ್ಮಲಾ ಮತ್ತು ರಮೇಶ್‌ಗೆ ಸಂಬಂಧ ಇರುವ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸಿದಾಗ ಆರೋಪಿ ಸವಿತಾ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಪೂರ್ವ ವಿಭಾಗ ಡಿಸಿಪಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ಕೆ.ಆರ್‌.ಪುರಂ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಮಮೂರ್ತಿನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಕೆ.ವಿ.ಶ್ರೀನಿವಾಸ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Friday, April 27, 2012

ದಿನಕ್ಕೆ ನಾಲ್ಕು ಬಾರಿ ಸೆಕ್ಸ್‌ ಬಯಕೆ !

ತಾನು 10 ವರ್ಷಗಳಲ್ಲಿ 70 ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದೇನೆ ಎಂದು ಸ್ವತಃ ತಪ್ಪೊಪ್ಪಿಕೊಂಡಿರುವ ಬ್ರಿಟಿಷ್‌ ಮಹಿಳೆಯೊಬ್ಬಳು ಲೈಂಗಿಕ ವ್ಯಸನಕ್ಕೊಳಗಾಗಿದ್ದ ತಾನು ಪ್ರತಿ ದಿನಕ್ಕೆ ನಾಲ್ಕು ಬಾರಿ ಲೈಂಗಿಕ ಸಂಪರ್ಕ ಬಯಸುತ್ತಿದ್ದೆ ಎಂದು ಹೇಳಿದ್ದಾಳೆ.

ಮಾಜಿ ಬ್ಯೂಟಿಷಿಯನ್‌ 27 ವರ್ಷದ ಶಾನನ್‌ ಫ್ಲೈನ್‌ ತಾನು ಲೈಂಗಿಕ ವ್ಯಸನಕ್ಕೊಳಗಾಗಿದ್ದು, ತನ್ನ ಬಾಯ್‌ ಫ್ರೆಂಡ್‌ ಮೇಲೆ ಬೆಡ್‌ ರೂಂನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ಕಳೆದ ವರ್ಷ ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದಳು ಎಂದು ಡೈಲಿ ಮೇಲ್‌ ಪತ್ರಿಕೆ ವರದಿ ಮಾಡಿತ್ತು.

ಮದ್ಯ ಮತ್ತು ಲೈಂಗಿಕತೆ ವಿರುದ್ಧದ ತನ್ನ ಹೋರಾಟ ಜೀವನವನ್ನೇ ಬದಲಿಸಿತು ಎಂದು ಫ್ಲೈನ್‌ ತಿಳಿಸಿದ್ದಾಳೆ.

ನನ್ನ ಲೈಂಗಿಕ ವ್ಯಸನವು ಮದ್ಯಪಾನಕ್ಕೆ ಸಂಬಂಧಿಸಿತ್ತು. ನಾನು ಮದ್ಯಪಾನ ಮಾಡಿದಾಗ ಲೈಂಗಿಕ ಸಂಪರ್ಕ ನಡೆಸುವ ಬಯಕೆಯುಂಟಾಗುತ್ತಿತ್ತು ಎಂದು ಹೇಳಿರುವ ಆಕೆ ಈಗ ಅದು ಕಡಿಮೆಯಾಗಿದೆ ಎಂದು ತಿಳಿಸಿದ್ದಾಳೆ.

ಮದ್ಯಪಾನದಿಂದ ಉಂಟಾಗುವ ವ್ಯಸನದಿಂದ ಮುಕ್ತವಾಗಲು ತಾನು ವಾರಕ್ಕೆ ಮೂರು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇನೆ. ವಾರಕ್ಕೊಂದು ಬಾರಿ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್‌)ಗೆ ಹೋಗುತ್ತೇನೆ. ನಾನು ಹೊಸ ಗೆಳೆಯನನ್ನು ಆಯ್ಕೆ ಮಾಡಿಕೊಂಡಿಲ್ಲ. ನಾನು ಗೆಳೆಯನ ಜೊತೆ ಇರುವಾಗ ನಾನೊಬ್ಬಳು ಹುಡುಗಿ ಎಂದು ಅಂದುಕೊಳ್ಳುವುದೇ ಇಲ್ಲ, ನಾನು ಪುರುಷರಿಂದ ದೂರ ಉಳಿದಿದ್ದೇನೆ ಎಂದು ಆಕೆ ವಿವರಿಸಿದ್ದಾಳೆ.

ತನ್ನ ಲೈಂಗಿಕ ವ್ಯಸನದ ಬಗ್ಗೆ ಮಾತನಾಡಿದ ಫ್ಲೈನ್‌, ಖ್ಯಾತ ಗಾಲ್ಫ್‌ ಆಟಗಾರ ಟೈಗರ್‌ ವುಡ್ಸ್‌ ಲೈಂಗಿಕ ಹಗರಣ ಬಹಿರಂಗವಾದ ನಂತರ ತನಗಿದ್ದ ಲೈಂಗಿಕ ವ್ಯಸನದ ಬಗ್ಗೆ ಬಹಿರಂಗಪಡಿಸಿದ್ದಾಗಿ ತಿಳಿಸಿದ್ದಾಳೆ.

ತನ್ನ ಮಾಜಿ ಪ್ರಿಯಕರನೊಂದಿಗೆ ಬೆಳಗ್ಗೆ ಲೈಂಗಿಕ ಸಂಪರ್ಕ ನಡೆಸಿದ ನಂತರವೂ ಆತ ರಾತ್ರಿ ವೇಳೆ ಮನೆಗೆ ಬಂದಾಗ ಕಾಮತೃಷೆ ಅತ್ಯಧಿಕವಾಗಿರುತ್ತಿತ್ತು. ತನಗೆ ತೃಪ್ತಿಯೇ ಆಗುತ್ತಿರಲಿಲ್ಲ, ಲೈಂಗಿಕ ಸಂಪರ್ಕಕಕ್ಕೆ ನಿರಾಕರಿಸಿದ್ದ ಬಾಯ್‌ ಫ್ರೆಂಡ್‌ ಮೇಲೆ ಕುಪಿತಳಾಗಿ ಮೊಬೈಲ್‌ ಫೋನ್‌ ಎಸೆದಿದ್ದಾಗಿ ತಿಳಿಸಿದ್ದಾಳೆ.

ನಾನು ಯಾವಾಗಲೂ ಕ್ರೂರಿಯಾಗಿರುತ್ತಿರಲಿಲ್ಲ, ಆದರೆ ಲೈಂಗಿಕ ಬಯಕೆಯಿಂದಾಗಿ ಈ ರೀತಿ ಆಗುತ್ತಿತ್ತು ಎಂದು ತಿಳಿಸಿದ್ದಾಳೆ. ಪ್ರತಿ ದಿನದ ಪ್ರತಿ ಗಂಟೆಯೂ ಲೈಂಗಿಕತೆಯ ಬಗ್ಗೆ ಚಿಂತಿಸುತ್ತಿದ್ದೆ ಎಂದು ಆಕೆ ತಿಳಿಸಿದ್ದಾಳೆ.