Thursday, May 10, 2012

ಹೃದಯಾಘಾತಕ್ಕೆ ಈರುಳ್ಳಿ ಚಿಕಿತ್ಸೆ!

ಹೃದಯಾಘಾತಕ್ಕೆ ಈರುಳ್ಳಿ ಚಿಕಿತ್ಸೆ!
ಲಂಡನ್: ಪ್ರತಿದಿನ ಸೇಬು, ಕಿತ್ತಳೆ, ಈರುಳ್ಳಿ, ಗ್ರೀನ್ ಆ್ಯಂಡ್ ಬ್ಲ್ಯಾಕ್ ಟಿ ಸೇವನೆ ಕೇವಲ ರಕ್ತ ಹೆಪ್ಪುಗಟ್ಟುವಿಕೆಯನ್ನು ದೂರ ಮಾಡುವುದಲ್ಲದೆ ಅವು ಒಳಗೊಂಡಿರುವ ರಾಸಾಯನಿಕ ಹೃದಯಾಘಾತ, ಪಾರ್ಶ್ವವಾಯುಗಳಲ್ಲಿಯೂ ಪರಿಣಾಮಕಾರಿ ಚಿಕಿತ್ಸೆ ಆಗಬಲ್ಲದು ಎಂದು ಸಂಶೋಧನೆ ಹೇಳಿದೆ.

ಇವುಗಳಲ್ಲಿರುವ ಅಂಶವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಕಿಣ್ವದ ಪಾಲ್ಗೊಳ್ಳುವಿಕೆಗೆ ತಡೆಯೊಡ್ಡುವ ಮೂಲಕ ರಕ್ತ ಹೆಪ್ಪುಗಟ್ಟುವಿಕೆಯ ಸಂಭಾವ್ಯ ಅಪಾಯವನ್ನು ತಪ್ಪಿಸುತ್ತದೆ.

ರಕ್ತ ಹೆಪ್ಪುಗಟ್ಟುವಲ್ಲಿ ಪಿಡಿಐ ಕಿಣ್ವವು ಕ್ಷಿಪ್ರವಾಗಿ ರಕ್ತನಾಳ ಮತ್ತು ಮಲಿನ ರಕ್ತನಾಳಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಗುಣ ಹೊಂದಿದೆ.

ಹಾರ್ವರ್ಡ್ ವೈದ್ಯಕೀಯ ಕಾಲೇಜು ಈ ಸಂಶೋಧನೆ ಕೈಗೊಂಡಿದ್ದು, ಸೇಬು, ಈರುಳ್ಳಿ, ಕಿತ್ತಳೆಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಕಿಣ್ವವನ್ನು ವಿರೋಧಿಸುವ ಅಂಶಗಳಿರುವುದು ದೃಢಪಟ್ಟಿದೆ ಎಂದು ಪ್ರೊ. ರಾಬರ್ಟ್ ಫ್ಲೌಮೆನ್‌ಹಫ್ತ್ ಹೇಳಿದ್ದಾರೆ.

ಅಧ್ಯಯನದಲ್ಲಿ 500 ನಾನಾ ರಾಸಾಯನಿಕಗಳನ್ನು ಪರೀಕ್ಷೆಗೆ ಒಡ್ಡಲಾಗಿದೆ. ಇದಕ್ಕಾಗಿ ವೈಜ್ಞಾನಿಕ ಕಂಪ್ಯೂಟರ್ ಮಾದರಿಗಳನ್ನು ಕೂಡ ಬಳಸಿಕೊಳ್ಳಲಾಗಿದೆ.

ಕೃಪೆ : ವಿಜಯ ಕರ್ನಾಟಕ

No comments:

Post a Comment