Monday, August 13, 2012

ಮನಸ್ಸಿನ ಗಾಯ ದೇಹಕ್ಕೆ ಅಪಾಯ

ಮನಸ್ಸಿನ ಗಾಯ ದೇಹಕ್ಕೆ ಅಪಾಯ
                      ಡಾ. ಕೆ. ರಾಮಚಂದ್ರ

ಒತ್ತಡದ ಬದುಕು ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹಲವು ಮಾನಸಿಕ ಸಮಸ್ಯೆಗಳಿಗೂ ಇದೇ ಒತ್ತಡ ದಾರಿ ಮಾಡುತ್ತದೆ.


ಎಷ್ಟೋ ಬಾರಿ ಮಾನಸಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ ಇದೇ ದೀರ್ಘಕಾಲದ ರೋಗವಾಗಿ ಕಾಡಬಹುದು. ಮಾನಸಿಕ ಒತ್ತಡದಿಂದ ದೈಹಿಕ ಬದಲಾವಣೆಗಳು ಕೂಡ ಕಾಣಿಸುತ್ತವೆ.


ದೇಹದ ಮೇಲೆ ಪರಿಣಾಮ

ಮಾನಸಿಕ ಒತ್ತಡದಿಂದ ಉಂಟಾಗುವ ಸಮಸ್ಯೆಗಳೆಂದರೆ ಕೂದಲು ಉದುರುವಿಕೆ, ಬಾಯಿ ಒಣಗುವಿಕೆ, ಪದೇ ಪದೇ ಬಾಯಿ ಹುಣ್ಣು, ಕಾರಣವಿಲ್ಲದೆ ಕೆರಳುವಿಕೆ, ಹೆಚ್ಚು ಹೃದಯಬಡಿತ, ರಕ್ತದೊತ್ತಡ ಹೆಚ್ಚುವಿಕೆ, ಅಂಗೈ ಮತ್ತು ಮುಖದಲ್ಲಿ ಬೆವರುವಿಕೆ, ಮಾಂಸಖಂಡಗಳ ಸೆಳೆತ, ಲೈಂಗಿಕ ಆಸಕ್ತಿ ಕುಂದುವಿಕೆ, ಉಸಿರಾಟದ ತೊಂದರೆ, ಮೈಕೈಯಲ್ಲಿ ಹೆಚ್ಚು ನೋವು, ಮಾಂಸಖಂಡಗಳ ಬಿಗುವು, ಜೀರ್ಣಶಕ್ತಿ ಕುಂದುವಿಕೆ, ಹಸಿವಿಲ್ಲದಿರುವುದು, ಕರಳು ಮರುವರ್ತಿಕ, ಜಠರದಲ್ಲಿ ಉರಿ, ಹೆಚ್ಚು ಬೆವರುವಿಕೆ ಉಂಟಾದಾಗ ಎಚ್ಚರ ವಹಿಸುವುದು ಹಾಗೂ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಪರಿಹಾರ

ದಿನನಿತ್ಯ ಜೀವನವನ್ನು ಯೋಜನಾಬದ್ಧವಾಗಿ ರೂಪಿಸಲು ಪ್ರಯತ್ನಿಸಿ.ಕುಟುಂಬದ ಸದಸ್ಯರ ಜತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಉತ್ತಮ ಬಾಂಧವ್ಯ ಬೆಳೆಸಲು ಪ್ರಯತ್ನಿಸಿ. ನಿಮ್ಮ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತನವಿರಲಿ. ಮೂಢನಂಬಿಕೆ ಇದ್ದರೆ ಬಿಡಿ, ಭಗವಂತನಲ್ಲಿ ನಂಬಿಕೆ ಇಡಿ. ಬಾಬಾ, ಯೋಗಿಗಳು ಹಾಗೂ ಸ್ವಾಮೀಜಿಗಳ ಸಹವಾಸದಿಂದ ದೂರವಿರಿ.ದಿನನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ, ದೇವಸ್ಥಾನಗಳಿಗೆ ಭೇಟಿ, ಉತ್ತಮರ ಸಹವಾಸ, ಉತ್ತಮ ಸಂಗೀತ, ಕುಟುಂಬ ಸದಸ್ಯರ ಜತೆ ಪ್ರವಾಸ, ವಿಹಾರ, ಉತ್ತಮ ಸ್ನೇಹಿತರ ಜತೆ ಹರಟೆ, ಹಾಸ್ಯ ಇವುಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಕ್ರಮಬದ್ಧ ಆಹಾರ ಪದ್ಧತಿ, ವ್ಯಾಯಾಮ ಅಳವಡಿಸಿಕೊಳ್ಳಿ.ಅತಿ ಶೀಘ್ರ ಶ್ರೀಮಂತನಾಗಬೇಕೆಂಬ ಹುಚ್ಚು ಹಂಬಲ ಹಾಗೂ ಅಡ್ಡದಾರಿ ಹಿಡಿಯಲು ಪ್ರಯತ್ನಿಸಬೇಡಿ. ನಿಮ್ಮ ಮೇಲೆ ನಂಬಿಕೆ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಕ್ರಮಬದ್ಧ ಜೀವನದ ಅಳವಡಿಕೆ ಹಾಗೂ ನಿಮ್ಮ ನಂಬಿಕಸ್ಥ ವೈದ್ಯರ ಸಲಹೆ ಪಡೆದು ದೀರ್ಘಕಾಲ ಉತ್ತಮ ಆರೋಗ್ಯದಿಂದ ಬಾಳಲು ಪ್ರಯತ್ನಿಸಿ.
 
ಕೃಪೆ : ವಿಜಯ ಕರ್ನಾಟಕ

No comments:

Post a Comment